Sunday, December 26, 2010

A Reply Poem



Recently came across a poem by Christopher Marlowe called "Come live with me and be my love". Its a love poem written by him to his beloved.

It was a fun task given to me by a respected person to attempt writing a reply to Christopher Marlowe's poem in the present scenario! I just tried doing the same and it was absolutely good experience :) Here it goes:

(Read Christopher Marlowe's poem HERE and then read the following)


A reply to Christopher Marlowe's poem


The lovely valleys, hill and groves

The steepy woods that I adore

If you can show me such pleasures

Away from this concrete jungle my love


The reeking rush and the running crowd,

The engulfed pandemonium by the horrid hustle!

If we can heave out of this and fly to the melodious birds

And the shallow rivers that regales mind and rejuvenates love

I would like to come to thee and be thy love!


No matter the roses, the fragrance

The flowers or the kirtles embroidered!

No desirous on any finest gowns

Not the fair lined slippers or the amber studs


The essence begets in thy true love that crest

If thee sprinkle this and if it deepens our belonging

This does please me and make me move

I would then be delighted to live with thee and be thy love!

Monday, December 13, 2010

ಜೀವನ.ಕಾಂ!



ಜೀವನದ ಪಯಣದ ಮಹತ್ತರ ಘಟ್ಟ
ಇತ್ತ ಕಾಡು ಅತ್ತ ಕತ್ತಲೆ ನಡುವೆ ಬಯಲ ಬೆತ್ತಲೆ!
ಕಡುಗಪ್ಪಿನ ಭಯಾನಕ… ಹಿತವಾದ ಮೌನ


ಹಚ್ಚಲೇ ಬೇಕಿನ್ನು ಸಪೂರದ ಸಣ್ಣ ಲಾಟೀನು
ಎನ್ನುವಷ್ಟರಲ್ಲಿ, ಅರೆ...ಈತನಾರು!
ನಿರ್ಭಾರ ನಿರಾತಂಕ ನದಿಯ ಅಲೆಗಳ ಮೀಟುತಾ?!


ಆತನ ದೀಪ ನನ್ನ ಸಣ್ಣ ಲಾಟೀನಿಗಿಂತ ಪ್ರಖರ!
ಮತ್ತವನ ಕನಸ ಕೊಂಡಿಗಳೂ ಸಹ!
ಸಾಕಷ್ಟು ದಿನ ಮರೆತಿದ್ದ ಹಾಡನ್ನು ಕನವರಿಸಿದ...


ಲಯ ತಾಳ ಜೀವ ಭಾವವೆಲ್ಲವೂ ಬೇರೆ
ಆದರೂ.. ಆ ಹಾಡು ಮನನಡುಗಿಸಿದರೂ.. ಸೆಳೆಯಿತು!
ನನ್ನದಲ್ಲದ ರಾಗ ನನಗಂದು ಹಿಡಿಸಿತ್ತು!!


ಮತ್ತೀಗ ದೀಪ ಲಾಟೀನೆರಡರ ಬೆಳಕು ವರ್ಣಮಯ..
ಆ ಬಣ್ಣ.. ಹಿತ ಅಹಿತಗಳ ಕಲಸುಮೇಲೋಗರ!
ಸಂಯೋಜಕ.....ಸಂಕೀರ್ಣ.....ಸುಂದರ!


ಹೀಗೆ ಇಬ್ಬದಿಯ ಮನದ ತುಮುಲಗಳ
ಕನಸುಗಳ ಅನುಭವಿಸಿ ಆಸ್ವಾದಿಸುವುದ ಕಲಿಸಿ
ನಗಿಸಿ ನಗುವುದೇ...ಈ ಜೀವನ!

Monday, November 8, 2010

The day that was…




Cannot forget that moment;

When the sip of the coffee shared our visions

When our coyness damasked a bright smile on our faces

The symposium that substantiated a similar wavelength

And the innocent smile that lit up on your face when we shook hands



Now the search has come to an end, with a new hope and desire

To start a vivid and colourful journey together in this life

Which takes us to the reach of alluring pinnacles

Which accomplishes our dreams and augments belongingness

With love, trust, care and passion for each other



This is a sweet new commitment for the rest of my life

And I would hope assure you the best way I can

That I would be a part of your life in every other concern

By the same feel, I would again say, as I did the other day

Welcome to my tiny little life………!


Friday, October 8, 2010

ಕಾನ್ಫೆರೆನ್ಸ್ ರೂಂನಲ್ಲಿ ಗಾಂಧೀ...



ಅಂದು ನಮ್ಮ ಆಫೀಸ್ ಹಾಗೂ ನನ್ನ ವೃತ್ತಿ ಜೀವನದ ಒಂದು 'ಮುಖ್ಯ' ದಿನ. ನಮ್ಮ ಮಧ್ಯಮ ಪ್ರಮಾಣದ ಭಾರತೀಯ ಕಂಪೆನಿಯು ಒಂದು ಪ್ರಖ್ಯಾತ ವಿದೇಶೀ ಶೈಕ್ಷಣಿಕ ಕಂಪನಿಯೊಂದಿಗೆ ಕೈಕುಲುಕಿತ್ತು. ಎರಡೂ ಕಂಪನಿಗಳೂ ಸೇರಿ ವಿಧ್ಯಾಭ್ಯಾಸದ ಒಂದು ಹೊಸ ಆಯಾಮವನ್ನು ಸೃಷ್ಟಿಸಲು ಮುಂದಾಗಿತ್ತು ಮತ್ತು ಇದರಲ್ಲಿ ನನ್ನ ಪಾತ್ರವೂ ಒಂದಷ್ಟಿದೆ ಎಂಬುದರ ಬಗ್ಗೆ ನನಗೆ ಹೆಮ್ಮೆಯೂ ಇತ್ತು. ಇಂಗ್ಲೆಂಡಿನಿಂದ ಆ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಮತ್ತು ಮುಂದಿನ ಹಂತಗಳ ಕುರಿತು ಚರ್ಚಿಸಲು ಒಂದು ವಿಶೇಷ ಟೀಮ್ ಅನ್ನು ರಚಿಸಿ ತರಬೇತಿ ನೀಡಲು ಸ್ವತಃ ಇಂಗ್ಲೆಂಡಿನಿಂದ ಓರ್ವ ಅನುಭವೀ ವ್ಯಕ್ತಿ ಬರಲಿದ್ದ. ಆತನನ್ನು ಭೇಟಿ ಮಡಿ ಇನ್ನಷ್ಟು ಹೊಸವಿಷಯಗಳನ್ನು ಅರಿಯುವ ಸಂತಸ, ಕುತೂಹಲ ಎಲ್ಲರಲ್ಲೂ ಮೂಡಿತ್ತು. ಆ ಹೊರ ದೇಶೀ ಅತಿಥಿಯನ್ನು ಸ್ವಾಗತಿಸಲು ನಾವೆಲ್ಲಾ ಉತ್ಸುಕತೆಯಿಂದ ದಿನ ಪ್ರಾರಂಭಿಸಿದ್ದೆವು. ಲಿಫ್ಟಿನ ಬಾಗಿಲು ತೆರೆದಾಕ್ಷಣ ವಾಡಿಕೆಯಂತೆ ಹೂವಿನಿಂದ ಅಲಂಕೃತಗೊಂಡ ರಂಗೋಲಿ ಮತ್ತು ದೀಪ. ನಮ್ಮ ಆಫೀಸಿನ ಯಾವುದೇ ವಿದೇಶೀ ಅಥಿತಿಯರಿಗೆ ಇದೇ ರೀತಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಆತ್ಮೀಯ ಸ್ವಾಗತ.


ಸುಮಾರು ೧೦ ಘಂಟೆ ಮತ್ತು ಈತ ನೈಲ್ ಆನ್ ದಿ ಡಾಟ್ ಹಾಜರಿದ್ದ. ಕೆಂಪು ದೇಹದ, ಎತ್ತರದ ಮೈಕಟ್ಟು, ಸುಮಾರು ೬೦ ರ ಪ್ರಾಯ. ಔಪಚಾರಿಕ ಶೇಕ್ ಹ್ಯಾಂಡ್, ನಗು ಎರಡು ಮಾತಿನ ನಂತರ ಎಲ್ಲರೂ ತಮ್ಮ ಸ್ಥಳಗಳಲ್ಲಿ ಕುಳಿತರು. ಅಲ್ಲಿಂದಲೇ ಶುರುವಾಯಿತು ಈತನ ಮಾತು. ಡಾಕ್ಟರೇಟ್ ಪಡೆದಿರುವ ಈತ ಶೈಕ್ಷಣಿಕ ವಿಷಗಳಲ್ಲಿ ನಿಷ್ಣಾತ. ಎಲ್ಲರಿಗೂ ತನ್ನ ಬಗೆಗಿನ ವಿವರಣೆಯನ್ನು ನೀಡಲು ಪ್ರಾರಂಭಿಸಿದ, ಅತ್ಯಂತ ಅನುಭವವಿರುವ, ಜ್ಞಾನ ಪಡೆದಿರುವ ವ್ಯಕ್ತಿ ಎಂದು ಅವರ ಬಗೆಗಿನ ಗೌರವ ಇಮ್ಮಡಿಸಿತು.


ತರಬೇತಿಯಲ್ಲಿ ಮಗ್ನರಾದ ನಾವು ನಡುವೆ ಒಂದು ಸಣ್ಣ ವಿರಾಮವನ್ನು ಪಡೆದೆವು. ಆತನೊಂದಿಗಿನ ಚಹಾ ಸಮಯದ ಮಾತುಕತೆಯ ನಡುವೆ ಪ್ರಾರಂಭವಾದದ್ದು ಚೀನೀ ದೇಶದ 'ವಿಚಿತ್ರ' ಲಕ್ಷಣಗಳ ಕುರಿತ ಪಟ್ಟಿ. ಆತ ಒಂದು ಸಣ್ಣ ವಿಷಯವನ್ನು ರಸಭರಿತವಾಗಿ ಕಳೆಕಟ್ಟಿ ಹೇಳುವುದು, ಮತ್ತದಕನುವಾಗಿ ನಮ್ಮ ಟೀಮ್ ನ ಕೆಲವರು ತಾಳ ಹಾಕಿ ಮತ್ತಷ್ಟು ಮಾತನಾಡುವುದು. ಅರೆ! ಒಬ್ಬರ ಬೆನ್ನ ಹಿಂದೆ ಹೀಗೆ ಮಾತನಾಡುವುದು ತಪ್ಪಲ್ಲವೇ? ಈತ ಇಂಥ ಮೇಧಾವಿ, ಇವನಿಗೆ ಗೊತ್ತಿಲ್ಲವೇ? ಅದು ಇಂತಹ ಅಫಿಶಿಯಲ್ ಮೀಟ್ ನಲ್ಲಿ! ಎಂಬುದು ನನ್ನ ಪ್ರಶ್ನೆಯಾಗಿತ್ತು. ಸರಿಯಾಗಿ ತಿಳಿಯುವಷ್ಟರಲ್ಲಿ ತರಬೇತಿಯ ಸಮಯ ಮತ್ತೆ ಮೊದಲ್ಗೊಂಡಿತು. ನನ್ನ ಮನಸ್ಸಿನ್ನೂ ಆತ ಪದೇ ಪದೇ ಉದಾಹರಣೆಗಳೊಂದಿಗೆ ಚೀನಾವನ್ನು ಖಂಡಿಸುತ್ತಿದ್ದುದು, ವ್ಯಂಗ್ಯ ಮಾಡಿದ್ದು ಎಲ್ಲಾ ವಿಚಿತ್ರವಾಗಿ ತೋರುತ್ತಿತ್ತು. ಅವೆಲ್ಲ ನಿಜವೋ ಸುಳ್ಳೋ ಅನ್ನುವಷ್ಟು ವರ್ಣನೀಯ ಮತ್ತು ಕೆಲವು ಹೇಯಕರ!


ಈ ಬಾರಿ ಆತನ ಮಾತಿಗೆ ಸಿಲುಕಿದ್ದು ಅಮೇರಿಕ! ಅಂತಹ ಪ್ರಬಲ ದೇಶವು ಲವಲೇಶವೂ ತರುಮಿಲ್ಲವೆಂಬುದು ಈತನ ಅಭಿಪ್ರಾಯ. ಇವೆಲ್ಲ ಕನ್ವೆನ್ಶನಲ್ ಐಡಿಯೋಲೋಜಿ ಇರಬಹುದು ಎಂದು ಲೆಕ್ಕಿಸಿದೆ. ನಂತರ ಪ್ರಾರಂಭವಾದದ್ದು ಪಾಕಿಸ್ತಾನದ ಇದೇ ರೀತಿಯ 'ಗುಣಗಾನ'! ಛೆ! ಏನಿದು ಎನ್ನುವಷ್ಟರಲ್ಲೇ ಹೊಳೆದದ್ದು ಈತ ಒಬ್ಬ ರೇಸಿಸ್ಟ್ ಎಂದು. ಆತನಿಗೆ ಇಂಗ್ಲೆಂಡ್ ಹೊರತಾಗಿ ಉಳಿದೆಲ್ಲಾ, ಅದರಲ್ಲೂ ಏಷಿಯಾದ ಎಲ್ಲಾ ದೇಶಗಳೂ ತುಚ್ಚ ಮತ್ತು ನಿಕೃಷ್ಟ. ಅದೇ ಹಳೆ ಬ್ರಿಟಿಷ್ ಮೈಂಡ್ ಸೆಟ್.


ವಿಷಯ ಅತಿರೇಕಕ್ಕೆ ತಲುಪಿದ್ದು ಭಾರತದ ಬಗ್ಗೆ ಮಾತು ಪ್ರಾರಂಭವಾದಾಗ. ನಮ್ಮ ರಾಜಕಾರಣ, ಸಾರಿಗೆ ವ್ಯವಸ್ಥೆ, ಮಾಲಿನ್ಯ, ಡೆಮಾಕ್ರಸಿ, ಕೋಮುಗಲಭೆ ಇತ್ಯಾದಿ ಎಲ್ಲಾ ತರೇವಾರಿ ವಿಷಯಗಳ ಬಗೆಗಿನ ಆತನ ಕೊಂಕು ನುಡಿಗಳು! ಒಮ್ಮೆ ಆತ, "Why cant Indians follow rules like Europeans" ಎಂದು ಹೇಳಿ ಜೋರಾಗಿ ನಗತೊಡಗಿದ. ಪೇಚಾದ ನನ್ನ ಮುಖ ಏನನೋ ಹೇಳಲು ಹೊರಟರೂ ಅದು ತೀಕ್ಷ್ಣವಾಗಿ ಇಲ್ಲದುದಕ್ಕೆ ನನ್ನನ್ನು ನಾನೇ ಶಪಿಸಿದೆ. ಇಷ್ಟೇ ಸಾಲದು ಎಂದು ನನ್ನ ಟೀಮ್ ನ ಜೊತೆಗಾರರು, ಇದಕ್ಕೂ ಅವರೊಡನೆ ಸೇರಿ ನಮ್ಮ ದೇಶದ ವಿರುದ್ಧವೇ ಮಾತನಾಡುತ್ತಿದ್ದಾರೆ! ಅರೆಕ್ಷಣ 'ಇಲ್ಲೆನಾಗುತ್ತಿದೆ' ಎಂಬ ಪರಿಜ್ಞಾನವೇ ಇಲ್ಲದಾಯಿತು.


ಅವರ ಕೆಲಸ ನಡೆಯಲು ಜನ ಎಷ್ಟರ ಮಟ್ಟಿಗಾದರೂ ಇಳಿದು ಹೋಗುತ್ತಾರೆಯೇ ಅನಿಸಿತು. ಆತ ಈ ಜನರೊಂದಿಗೆ ಭಾರತದ ಬಗೆಗಿನ ಕೊಂಕಿನ ಲೇವಡಿಗಳನ್ನು ಮಾಡುತ್ತಾ ಅದಕ್ಕಿವರು ನಗುತ್ತಿರುವಾಗ, ಇವರು ತಮ್ಮ ಸ್ವ ಗೌರವಕ್ಕೆ ಧಕ್ಕೆ ತರುವುದು ಕಂಡು ಆತ ನಗುತ್ತಿದ್ದಾನೆ ಎಂಬ ಸತ್ಯ ಅರಿಯದೆ ಹೋದರೆ! ಅಥವಾ ಅರಿತರೂ ಅದು ತಮ್ಮ ಕೆಲಸದ ಮುಂದೆ ಏನೂ ಅಲ್ಲ ಎಂಬ ನಿರ್ವಿಣ್ಣತೆಯೇ! ಎಂಬ ಭಾವನೆ ಮೂಡಿತು. ಆ ಹೊರದೇಶದ ವ್ಯಕ್ತಿಗಿಂತ ನಮ್ಮ ಟೀಮ್ ನ ಜನರ ಮೇಲೆ ಹೆಚ್ಚು ತಿರಸ್ಕಾರ ಹುಟ್ಟಿತು. ನಮ್ಮ ದೇಶಕ್ಕೆ ಬಂದು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಆತನಿಗೆ ನೀನೆ ಸರಿ, ನೀನೆ ರಾಜ ಎಂದು ತಲೆಯ ಮೇಲೆ ಹೊರುವುದೇ!?


ಆತ ಇಷ್ಟು ಸ್ವತಂತ್ರವಾಗಿ ನಮ್ಮ ಬಗ್ಗೆ ಮಾತನಾಡಲು ಅಧಿಕಾರ ಪಡೆಯಲು, ನಾವು ಗುಲಾಮರಂತೆ ತಲೆಯಾಡಿಸಲು ಕಾರಣವೇನು?! ಎಲ್ಲ ಕಂಪನಿಗಳ ಪರಿಸ್ಥಿತಿ ಹೀಗೇನೆ?! ನಮ್ಮ ನಾಯಕರು ಅವರ ಸ್ವಾರ್ಥಪರತೆಯಲ್ಲಿ ಮತ್ತು ಜನರು ಅವರದ್ದೇ ಇನ್ನಷ್ಟು ಸ್ವಾರ್ಥದಲ್ಲಿ ಮುಳುಗಿದುದರ ಕೊಡುಗೆಯಿರಬೇಕು, ನಮ್ಮ ಸ್ವಂತಿಕೆಯ ಬಗೆಗೆ ಯಾರಿಗೂ ಕಾಳಜಿಯಿಲ್ಲ, ಇಷ್ಟೆಲ್ಲಾ ಹೇಳುತ್ತಿರುವ ನನ್ನನ್ನೂ ಸೇರಿಸಿ! ಇವೆಲ್ಲ ಅನಿವಾರ್ಯವೆನ್ನುವಷ್ಟು ಬೆಳವಣಿಗೆ!


ನನ್ನ ತಲೆಯೊಂದಿಗೆ ಈ ಭೂಮಿಯೂ ತಿರುಗ ಹತ್ತಿದೆ ಎನಿಸಿತು. ಆದರೆ ಈಗ ಹಿಂದಕ್ಕೆ, ಚರಿತ್ರೆಯೆಡೆಗೆ ತಿರುಗುತ್ತಿದೆಯೇ? ಮತ್ತೆ ಬ್ರಿಟಿಷ್ ಛಾಯೆಯತ್ತ! ನಮ್ಮೆಲ್ಲರ ಈ ಅನಿವಾರ್ಯ ಬೆಳವಣಿಗೆಗಳು ಏನನ್ನು ಪರಿಚಯಿಸಬಹುದು? ಜಾಗತೀಕರಣದ ಭವಿಷ್ಯ ಮತ್ತೊಂದು ಈಸ್ಟ್ ಇಂಡಿಯಾ ಕಂಪನಿ?!.....ಕಾನ್ಫೆರನ್ಸ್ ರೂಂನ ಮೂಲೆಯ ಕುರ್ಚಿಯಲ್ಲಿ ಗಾಂಧೀಜಿ ಮೌನವಾಗಿ ಕುಳಿತಿದ್ದರು!

Thursday, September 23, 2010

ಹೀಗೆ ನಾನು-ನೀನು



ನೀನು ಕರೆದಾಗ ಓ ಎನಬೇಕು

ನಿನ್ನ ಮಾತಿಗೆ ನಾ ನಗಬೇಕು

ನಿನ್ನ ನೋಟದ ಬಾಣಕೆ ಕರಗಿ

ನಾ ನೀರಾಗಬೇಕು!



ಕಾದ ನೊರೆವಾಲ ಕಾಫಿ ಕಪ್ಪು

ನಿನ್ನ ಕೈಗಿತ್ತು ನಗೆ ಬೀರಿ

ದಿನದ ದಣಿವೆಲ್ಲಾ ಮಣಿವಂತೆ

ತಣಿವಂತೆ ಮಾತಾಡಬೇಕು!



ತುಟಿ ಬಿರಿಯುವಷ್ಟು ಮಾತು ನಗು ಹರಟೆ

ನನ್ನ ಬಾಳ ಪಯಣದ ಆಸೆ ಕನಸುಗಳ

ನಿನ್ನಾಳದ ಕಂಗಳ ನಡುವೆ ತೆರವುಗೊಳಿಸಬೇಕು

ನಿನ್ನ ಸ್ಫೂರ್ತಿಯಿಂದಲೇ ಅವೆಲ್ಲ ಸಾಕಾರಗೊಳ್ಳಬೇಕು!



ನಿನ್ನಾಕಾಂಕ್ಷೆ ಅರಿತು ಅದಕನುವಾಗಬೇಕು

ನಿನ್ನಿಚ್ಛೆ ನಿರೀಕ್ಷೆಗಳೆಲ್ಲ ನಿಜವಾಗಬೇಕು

ನಾವಿಬ್ಬರೂ ಸೇರಿ ಬಾಳರ್ಥವರಿಯಬೇಕು

ಮತ್ತೆ, ಹೀಗೆಲ್ಲ ನಿಜಕ್ಕೂ ನಡೆಯಬೇಕು!

Friday, September 10, 2010

To a (un)known friend



I do not know you yet know a lot
I feel good when I talk to you
You make me think, you make me smile
You give me a reason to envisage


We have common interests which grows our rapport
Every day I talk to you, we exchange our thoughts
I recall our arguments, just to introspect on self
No clues what you feel but I have learnt a lot


Do not know if we ever meet
However my friend here is my greet
Thank you for this friendship
Which of course is unique

Thursday, July 15, 2010

ತಂಗಿಗೊಂದು ಮಾತು...



ಜನುಮ ದಿನದ ಶುಭಾಶಯಗಳು ನಿನಗೆ
ಹದಿನೆಂಟರ ಹರೆಯದ ಹೆಣ್ಣಾದೆಯೆಂಬ ಸಂತಸ ನಮಗೆ

ನಮ್ಮೆಲ್ಲರ ಮೆಚ್ಚಿನ ಕೂಸಾದ
ಸುಗುಣೆ, ಸಂಪ್ರೀತೆಯಾದ ನಿನಗೆ
ನನ್ನೀ ಹರಕೆ, ಆಶೀರ್ವಾದ
ಬಾಳು ನೂರ್ಕಾಲ ಸಂತಸದಿ ಹೀಗೆ

ನಿನ್ನ ಪುಟ್ಟ ಕಂಗಳಿಗೆ ಹಾಡಿದ್ದೆ
ನೆನಪಿದೆಯೇ ಜೋಗುಳ ಅಂದು
ಹದಿನೆಂಟು ವರುಷದಿಂದದೇ ಹರುಷ
ನೀತಂದೆ ಇಂದೂ

ಆನಂದ ಆಕ್ರಂದ, ಉಲ್ಲಾಸ ಉದಾಸ
ಎಲ್ಲಕೂ ಆದೆ ನೀ ಎಂದೂ ಜೊತೆಗಾತಿ
ನಿನಗಿದೋ ಈ ಹಿರಿಯಕ್ಕನ
ಸಲುಗೆ ಪ್ರೀತಿ ಗೆಳತಿ

ದಿಗಂತದೆಡೆಗೆ...


ಅದೆಂತಹ ಅಯಸ್ಕಾಂತೀಯ ಶಕ್ತಿ
ಒಲ್ಲೆನೆಂದರೂ, ಕಡೆಗೊಂದು ದಿನ ಸಿಕ್ಕಿ ಬಿದ್ದೆ
ಹಕ್ಕಿ ಹಾರಿ ಬಂದು ಕೂತಾಗ
ನೋಡದೇ ಕಡೆಗಣಿಸಿದ್ದೆ
ಬೇಡವಾಗಿತ್ತು ಅಂದು ಆ ನೋಟ

ಮತ್ತೀಗ, ಅರೆ! ಎಲ್ಲಿ?
ಅದೇ ಹಕ್ಕಿ, ಗರಿ ಬಿಚ್ಚಿ ಹಾರಿದೆ
ನಿಲುಕಿಗೂ ಸಿಗದಂತೆ
ಮತ್ತೆಂದೂ ತಿರುಗಿ ಬಾರದಂತೆ
ತಿರುಗಿನೋಡದಂತೆ
ದೂರ ತೀರ ದಿಗಂತದೆಡೆಗೆ




(BA ಓದುತ್ತಿದ್ದಾಗ ಬರೆದದ್ದು)

Friday, June 4, 2010

ಅನಿಸಿಕೆ



ಯಾಕೆ ಏನೇನೋ ಅನಿಸುತ್ತದೆ!
ಸರಿ ತಪ್ಪು ಏನೂ ತಿಳಿಯದು ಈ ಅನಿಸಿಕೆಗೆ
ಮನಸಿಗೆ ಈ ಹುಚ್ಚು ಆಲೋಚನೆಗಳನ್ನ
ತುಂಬಿದವರಾರು?

ನೀ ನನ್ನ ಹಾಗೆ
ನಾ ನಿನ್ನ ಹಾಗೆ
ನಾವಿಬ್ಬರೂ ನಾವಲ್ಲದ ಹಾಗೆ
ಆಗಸದಿ ಹಾರುವ ಚಿಟ್ಟೆಯಾದ ಹಾಗೆ

ನನ್ನ ಭಾವನೆಗೆ ನೀ ಉಸಿರಾದ ಹಾಗೆ
ನಿನ್ನ ಕಲ್ಪನೆಗೆ ನಾ ಮೂರ್ತವಾದ ಹಾಗೆ
ನಮ್ಮ ಕನಸಿನ ಹಣತೆ ಹಚ್ಚಿದ ಹಾಗೆ
ಕಲ್ಮಷವಿಲ್ಲದ ಪ್ರೇಮ ಜ್ಯೋತಿ ಬೆಳಗಿದ ಹಾಗೆ

ಹೌದು! ಇದು ಸ್ವಮುಗ್ಧ ಪ್ರಪಂಚ
ತಿಳಿದು ತಿಳಿದೂ ಕಟ್ಟಿದ ಕಲ್ಪನಾಲೋಕ
ಇದಕ್ಕೆ ಎಲ್ಲರೂ ಅರಸರು
ಮತ್ತಿದು ಪ್ರತಿ ವ್ಯಕ್ತಿಯ ವಯಕ್ತಿಕ ಆಸ್ತಿ

Sunday, May 9, 2010

ಯಾಂತ್ರಿಕ ಬದುಕಿಗೆ ಬ್ರೇಕ್ ಹಾಕುವ ವೈಭವ - ಈ ಪ್ರವಾಸದ ಅನುಭವ (ಭಾಗ - 2)

(ಭಾಗ 1 ರಿಂದ ಮುಂದುವರಿಕೆ...)


ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯೋ!


ಆಗುಂಬೆಯಲ್ಲೇ ಉಳಿಯುವ ಪ್ಲಾನ್ ಇದ್ದ ನಾವು ಗುಂಡನ ಸಲಹೆಯಂತೆ ಶೃಂಗೇರಿಯತ್ತ ಹೊರಟೆವು. ನಡುವೆ ಚೆಕ್ ಪೋಸ್ಟ್ನಲ್ಲಿ ಯಾರೋ ಇನ್ಸ್ ಪೆಕ್ಟರ್ ನ ವಿಚಾರಣೆಯಿಂದ ನಮ್ಮ ಗುಂಡನ ಮೂರನೇ ಹೆಸರು ಪರಿಚಯವಾಯಿತು, 'ಬಾಬು' ಎಂದು. ಬಹುಷಃ ತನ್ನ ಮುಸಲ್ಮಾನ ಹೆಸರನ್ನು ಹೇಳಿದರೆ ತೊಂದರೆಯಾಗಬಹುದೇನೋ ಎಂಬ ಕಾರಣಕ್ಕೆ ತನ್ನ ನಿಜನಾಮ ಕೇಳಲಿಲ್ಲವೇ ಎಂಬ ಅನುಮಾನ ಬಂತು. ತನ್ನ ಹೆಸರು ಮರೆ ಮಾಚುವ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಈ ಹಿಂದೂ - ಮುಸಲ್ಮಾನ್ ಭೇದದಿಂದಲ್ಲವೇ ಎನಿಸಿತು. ಆಗಷ್ಟೇ ಅನುಭವಿಸಿದ್ದ ಪ್ರಕೃತಿಯ ಹಿರಿತನ ಮತ್ತು ಈ ಮನುಷ್ಯನ ಕಾಂಪ್ಲೆಕ್ಸಿಟೀಸ್ ನ ಕನಿಷ್ಟತೆ ಎರಡೂ ಜಕ್ಷ್ಟಪೋಸ್ ಆಗಿ ಕಾಣುತ್ತಿತ್ತು. ಅಷ್ಟರಲ್ಲೇ ಬಂದಿತ್ತು ಶೃಂಗೇರಿ ತೀರ್ಥ. ಅಲ್ಲೇ ಒಂದು ಕಾಟೇಜ್ ರೂಂ ಬುಕ್ ಮಾಡಿ ನಿರಾಳವಾಗಿ ದೇವಸ್ಥಾನದಲ್ಲೇ ಊಟ ಮುಗಿಸಿ ರೂಮಿಗೆ ಮರಳಿ ಮಲಗಿದ್ದಷ್ಟೇ ಗೊತ್ತು, ಬೆಳಕು ಹರಿದಿತ್ತು. ಲಘುಬಗೆಯಿಂದ ಸಿದ್ಧರಾಗಿ, ಶಾರದಾದೇವಿ ಮತ್ತು ಆದಿ ಶಂಕರರ ದೇವಸ್ಥಾನಕ್ಕೆ ಹೊರಟೆವು. ಶೃಂಗೇರಿಯ ಆ ಪ್ರಾಚೀನ ದೇವಸ್ಥಾನ ನಯನ ಮನೋಹರವಾಗಿತ್ತು. ಮುಂಜಾನೆಯ ತುಂತುರಿನಲ್ಲಿ ತೊಯ್ದ ಆ ಆಲಯ ಮತ್ತಷ್ಟು ತಾಜಾತನದಿಂದ ತುಂಬಿತ್ತು. ಕಂಡೊಡನೆಯೇ 'ಶಿಲೆಯಲ್ಲ ವೀ ಗುಡಿಯು ಕಲೆಯ ಬಲೆಯು' ಎಂಬ ಕವಿವಾಣಿಯು ನೆನಪಾಯಿತು.

ಹೊಯ್ಸಳ ಶೈಲಿಯ ಆ ದೇವಸ್ಥಾನ ನಕ್ಷತ್ರಾಕಾರದಿಂದ ರಚಿತವಾಗಿತ್ತು. ಆರ್ಕಿಟೆಕ್ಚರ್ ನ ಅಭ್ಯಸಿಸುತ್ತಿರುವ ನನ್ನ ತಂಗಿಯ ಮೂಲಕ ಕಟ್ಟಡದ ರಚನೆಯ ಬಗ್ಗೆ ಮತ್ತಷ್ಟು ಮಾಹಿತಿ ದೊರೆಯಿತು. ನಂತರ ಕಟ್ಟಡದ ಸುತ್ತಲೂ ಜೀವಂತಿಸಲ್ಪಟ್ಟ ಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸತೊಡಗಿದೆವು. ಒಂದೊಂದು ಶಿಲ್ಪ ಒಂದೊಂದು ಕಥೆ ಹೇಳುತ್ತಿತ್ತು. ಯುದ್ಧ, ಆನಂದ, ಸಂಗೀತ, ಅವತಾರಗಳು, ನೃತ್ಯ ಇತ್ಯಾದಿ ಇತ್ಯಾದಿ. ಬಹುಷಃ ಅದರ ಡೀಟೈಲ್ಸ್ ಸ್ಟಡಿ ಮಾಡಿದರೆ ಒಂದು ಚರಿತ್ರೆಯ ಸಮಗ್ರ ಕಥೆಯೇ ತಿಳಿಯಬಹುದೇನೋ ಎನಿಸಿತ್ತು. ಮೈ ನವಿರೇಳಿಸುವಂತಹ ಆ ಶಿಲ್ಪಗಳು ಅದನ್ನು ಕೆತ್ತಲ್ಪಟ್ಟ ಕಲಾವಿದರ ಸಂಯಮ, ಕೌಶಲ್ಯತೆಗೆ ಮೂಕ ಸಾಕ್ಷಿಯಾಗಿತ್ತು. ಅದನ್ನೇ ನೋಡುತ್ತಾ ನನ್ನ ತಂಗಿ ಅದರ ಬಿಂಬವನ್ನೂ ಬಿಡಿಸಿದ್ದಳು. ಆ ದೇವಸ್ಥಾನದಲ್ಲಿ ಮೈನಸ್ ಪಾಯಿಂಟ್ ಆದದ್ದು ಎಂದರೆ, ಆ ಜನ ಜಂಗುಳಿ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಗುಂಪುಗುಂಪಾಗಿ ಜಮಾಯಿಸತೊಡಗಿತು. ಸಾಕಷ್ಟು ಭಕ್ತರು, ತೋರಿಕೆಯ ಭಕ್ತರು ಮತ್ತಷ್ಟು ಪ್ರವಾಸಿ ಹುರುಪಿನಿಂದ ಬಂದವರು ಇನ್ನಷ್ಟು. ಒಟ್ಟಿನಲ್ಲಿ ಅವರೆಲ್ಲರೊಟ್ಟಿಗೆ ನಾವೂ ಸಾಕಷ್ಟು ಸಮಯ ದೇವಸ್ಥಾನದಲ್ಲಿ ಕಳೆದು, ನಮ್ಮ ಪ್ರಯಾಣ ಮುಂದುವರೆಸಿದೆವು.


ಸಿರಿಮನೆಯ ಸೊಬಗು


ಶೃಂಗೇರಿಯ ರುಚಿಯನ್ನು ಸವಿದ ನಂತರ ನಮ್ಮ ಮುಂದಿನ ಪ್ರಯಾಣ ಸಿರಿಮನೆ (ಕಿಗ್ಗ) ಜಲಪಾತದೆಡೆಗೆ. ಹಸಿರು ಕಾಡಿನ ನಡುವೆ ಬಿಳಿವಾಲಿನಂತಿರುವ ಆ ಜಲಪಾತಗಳು, ಝರಿ ತೊರೆಗಳು ನನಗೆ ಅತ್ಯಂತ ಪ್ರಿಯವಾದ ಸ್ಥಳ. ಅದೇ ಭಾವಾವೇಶದಿಂದಲೇ ಉತ್ಸುಕಳಾಗಿ ಮುನ್ನಡೆದೆ. ಶೃಂಗೇರಿ ಇಂದ 20 ಕಿ ಮೀ ದೂರದಲ್ಲಿರುವ ಸಿರಿಮನೆಯ ದಾರಿಯೂ ಅಷ್ಟೇ ಸೊಗಸಾಗಿತ್ತು. ಜಲಪಾತದ ಹತ್ತಿರ ಪಾದಸ್ಪರ್ಶ ಮಾಡಿದ ಕೂಡಲೇ ಝರಿಯ ಮೊರೆತ ಕೇಳಿ ಪುಳಕಗೊಂಡೆ. ಬೇಸಿಗೆಯಾದ್ದರಿಂದ ಎಂದಿನಂತೆ ಝರಿ ತುಂಬಿ ಹರಿಯದಿದ್ದರೂ, ಸಾಕಷ್ಟು ರಭಸದಿಂದ ಝೇಂಕರಿಸುತ್ತಿತ್ತು. ನೀರು ಮೊಳಕಾಲ್ಮುಳುಗುವಷ್ಟು ಇಳಿದೆವು. ಅಲ್ಲೇ ನಮ್ಮಂತೆ ನೀರಾಟವಾಡುತ್ತಿದ್ದ ದೊಡ್ಡ ಹೆಂಗಸೊಬ್ಬರು ಹಿಂಜರಿಯುತ್ತಿದ್ದ ನಮ್ಮನ್ನು ಕಂಡು "ಬಾಮ್ಮಾ, ಇಂತಾ ಅನುಭವ ಮತ್ತೆ ಸಿಗದು. ಸಿಕ್ಕಾಗ ಎಂಜಾಯ್ ಮಾಡಬೇಕು" ಎಂದು ತಮ್ಮ ಸ್ನೇಹ ಹಸ್ತ ಚಾಚಿದರು. ಆ ನೀರಿನಲ್ಲಿಳಿದು ಎಲ್ಲ ಹಿಂಜರಿಕೆ ತೊರೆದು ಚೆನ್ನಾಗಿ ನೆನೆದು ಝರಿಯನ್ನನುಭವಿಸಿದೆವು. ಅಲ್ಲಿ ನೆರೆದಿದ್ದ ಜನರಿಗೂ ನಮಗೂ ಯಾವ ನಂಟಸ್ತಿಕೆಯಿಲ್ಲದಿದ್ದರೂ ಈ ಪ್ರಕೃತಿಯ ಮಡಿಲಲ್ಲಿ ನಾವೆಲ್ಲರೂ ಒಂದೇ ಆಗಿದ್ದೆವು. ಎಲ್ಲರೂ ಅವರ ಎಲ್ಲ ಟೆನ್ಶನ್, ಸ್ಟೇಟಸ್ ಬಿಟ್ಟು ಆ ಕ್ಷಣಕ್ಕೆ ಕಾಡಿನ ಮಕ್ಕಳಾಗಿದ್ದರು. ಸಮಯದರಿವೆಯೇ ಆಗಲಿಲ್ಲ!




ಸಾಹಿತ್ಯ - ಸಂಸ್ಕೃತಿಯ ಕೇತನ - ಕುಪ್ಪಳಿ


ಎಲ್ಲವೂ ಮುಗಿದಿತ್ತು. ಕೊನೆಗೆ ಉಳಿದಿತ್ತು ನಮ್ಮ ಕೇಂದ್ರೀಕೃತ, ಟ್ರಿಪ್ಪೋದ್ದೇಶೀ ಸ್ಥಳ ಕುಪ್ಪಳಿ. ಕುವೆಂಪುರವರ ನಿವಾಸ. ನೀರಾಟದಿಂದ ದಣಿದಿದ್ದರೂ, ಈಗಿನ್ನು ತೆರಳುವ ಸ್ಥಳದ ಬಗೆಗೆ ಉತ್ಸುಕತೆ. ಅದೇ ಉತ್ಸಾಹಕ್ಕೆ ಮತ್ತಷ್ಟು ಜೀವ ತುಂಬುವಂತೆ ಚಿಕ್ಕಮಗಳೂರಿನ ಕಾಡ ಸೌಂದರ್ಯ ಸಿರಿ. ಅದೇ ಕಾಡ ರಸಹೀರಿ ಮುಂದುವರೆಯುತ್ತಿದ್ದಾಗ ನಮಗೆ ಕಾಣಸಿಕ್ಕಿದ್ದು ಕುವೆಂಪುರವರ ತಾಯಿಯ ತವರೂರಾದ ಹಿರೇಕೊಡುಗೆ. ಅದೇ ಕುವೆಂಪುರವರ ಜನ್ಮ ಸ್ಥಳ. ಅವರ ಮನೆಯನ್ನು ಈಗ ಕುವೆಂಪು ಸಂದೇಶ ಭವನವನ್ನಾಗಿ ನಿರ್ಮಿಸಿದ್ದಾರೆ. ಕುವೆಂಪುರವರ ವಿಗ್ರಹ ಮೂರ್ತಿಯನ್ನು ಕೆತ್ತಿ ಸುತ್ತಲೂ ಅವರ ಬರಹಗಳನ್ನಿಳಿಸಿ ಅಲಂಕರಿಸಿದ್ದರು. ಖೇದವೆಂದರೆ ಆ ಸ್ಥಳ, ಪರಿಚಾರಕರು ಯಾರೂ ಇರದೇ ಅನಾಥವಾಗಿತ್ತು.

ಅಲ್ಲಿಂದ ಹೋರಾಟ ನಾವು, ಕುವೆಂಪುರವರ ಸ್ಪೂರ್ತಿಯ ಸೆಲೆಯೂ, ಅವರ ಸಮಾಧಿಯೂ ಆದ ಕವಿಶೈಲಕ್ಕೆ ಹೊರಟೆವು. ಅದೊಂದು ರೋಮಾಂಚಕಾರೀ ಸ್ಥಳ. ಆ ಸಮಾಧಿಯ ರಚನೆ, ಅದರ ಸುತ್ತಲೂ ಮೂಕ ಸ್ಥಂಬಗಳಂತೆ ನಿಂತ ಆ ಕಲ್ಗಂಬಗಳು ಕುವೆಂಪುರವರ ಘನತೆಗೆ ಸಾಕ್ಷೀಭೂತವಾಗಿತ್ತು. ಎಲ್ಲಿ ನೋಡಿದರೂ ಕುವೆಂಪುರವರ ನುಡಿಮುತ್ತುಗಳ ಕಲ್ಬರಹಗಳು, ನಳನಳಿಸುತ್ತಿದ್ದವು. ಅಲ್ಲಿ ಕಂಡ ಕುವೆಂಪುರವರ ಸ್ವಹಸ್ತಾಕ್ಷರ, ಅವರು ಧ್ಯಾನಿಸುತ್ತಿದ್ದ ಸ್ಥಳ, ಸುತ್ತಲಿನ ಪ್ರಕೃತಿ ನೋಟ, ಆ ವೈಭವೋಪೇತ ನಿಶ್ಯಬ್ಧತೆಗಳೆಲ್ಲವೂ ಕುವೆಂಪುರವರನ್ನು ಜೀವಂತ ಕಂಡಂತೆ ಅನುಭವ ತಂದಿತ್ತು.

ಕವಿಶೈಲದಿಂದ ಕುವೆಂಪುರವರ ಮನೆಗೆ ಕಾಲುದಾರಿಯಿದೆ. ಅದೇ ದಾರಿಯಲ್ಲೇ ಕುವೆಂಪುರವರು ಗಮಿಸುತ್ತಿದ್ದರಂತೆ. ಕಾಡಿನ ಮಧ್ಯದ ಆ ಕಾಲುದಾರಿಯಲ್ಲಿ ನಡೆದೇ ಹೋಗುವ ಹಂಬಲ ತೀವ್ರವಾಗಿದ್ದರೂ ಮಳೆರಾಯ ನಮ್ಮ ಸಾಥ್ ನೀಡಲಿಲ್ಲ. ಸರಿ, ಕಾರ್ನಲ್ಲೇ ಹೊರಟೆವು.

ಕಾರಿನಿಂದಿಳಿದ ಕೂಡಲೇ ಧುತ್ತೆಂದು ಪ್ರತ್ಯಕ್ಷವಾದದ್ದು ಮತ್ತೊಂದು ಅದ್ಭುತ, ವೈಭವಯುತ ಚರಿತ್ರೆ! ಇಡೀ ಕುಪ್ಪಳಿಗೆ ಇದ್ದದ್ದೇ ಒಂದೇ ಮನೆ. ಅದೇ ಕುವೆಂಪುರವರ ಮನೆ. 250 ವರ್ಷಗಳಷ್ಟು ಪ್ರಾಚೀನವಾದ ಹಾಳುಗೆಡವಿದ್ದ ಆ ಕಟ್ಟಡವನ್ನು ಮತ್ತೆ ಅದೇ ರಚನೆಯಲ್ಲೇ ಪುನರುಜ್ಜೀವನಗೊಳಿಸಿ ಜೀವಂತವಾಗಿಸಿದ್ದಾರೆ. ಮನೆ, ಮನೆಯಲ್ಲಿ ಉಪಯೋಗಿಸುತ್ತಿದ್ದ ಪಾತ್ರೆ, ಪರಡಿ, ಬಟ್ಟೆ, ಕೊಠಡಿಗಳು, ಬಾಣಂತಿ ಕೊಠಡಿ, ಕಣಜ ಇತ್ಯಾದಿಗಳಿಂದ ಆ ಕುಪ್ಪಳಿ ಮನೆಯವರ ಸಂಸ್ಕೃತಿಯನ್ನೇ ಮರು ಸೃಷ್ಟೀಕರಿಸಿರುವುದು ಅನುರಣನೀಯವಾಗಿತ್ತು. ಮತ್ತೊಂದು ಗಮನ ಸೆಳೆವ ಅಂಶವೆಂದರೆ, ಕುವೆಂಪುರವರು ಉಪಯೋಗಿಸುತ್ತಿದ್ದ ಬಟ್ಟೆಗಳು, ಲೇಖನಿ, ಕನ್ನಡಕ, ಶೇವಿಂಗ್ ರೆಜರ್ ಇತ್ಯಾದಿ. ಎಲ್ಲವೂ ಆಕರ್ಷಕವಾಗಿ, ದುಬಾರಿಯಾಗಿ ಇದ್ದುದು ಕುವೆಂಪುರವರ ಸೌಂದರ್ಯ ಪ್ರಜ್ಞೆ ಮತ್ತು ಆಸಕ್ತಿಗಳನ್ನು ಸಾರುತ್ತಿತ್ತು. ಅವರ ಪ್ರಶಸ್ತಿ, ಪುರಸ್ಕಾರಗಳಿಗಂತೂ ಲೆಕ್ಕವೇ ಇಲ್ಲ! ಅದರಲ್ಲಿ ಅತ್ಯಂತ ಗಮನ ಸೆಳೆದದ್ದು ಕರ್ನಾಟಕ ರತ್ನ ಪ್ರಶಸ್ತಿ. ಗಾತ್ರದಲ್ಲಿ ದೊಡ್ಡದಾದ, ಗಂಭೀರವಾದ ಆ ಶ್ರೇಷ್ಠ ಪ್ರಶಸ್ತಿಯ ನೋಟ ಮನಸೂರೆಗೊಂಡಿತ್ತು.

ಅವರ ಸಾಹಿತ್ಯ ಕೃಷಿಯ ಆಗರವೇ ಆದ ಆ ಮನೆಯ ಒಂದು ಕೊಠಡಿಯಲ್ಲಿ ಎಲ್ಲ ಕೃತಿಗಳನ್ನೂ, ರಚನೆಗಳನ್ನೂ ಪ್ರದರ್ಶಿಸಿದ್ದರು. ಅದರಲ್ಲಿ ಅತ್ಯಂತ ಗಮನ ಸೆಳೆದದ್ದು, ಅವರ ಸ್ವಹಸ್ತಾಕ್ಷರದ ಮುದ್ರೆಯಾದ 'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯ. ಇವೆಲ್ಲವನ್ನೂ ವೀಕ್ಷಿಸಿ, ಕಣ್ತುಂಬಿ ಪುಳಕಗೊಂಡಿದ್ದ ನಾವು ಫೋಟೋಗ್ಯಾಲರಿ ಹೊಕ್ಕೆವು. ಕುವೆಂಪುರವರ ಫೋಟೋಗ್ಯಾಲರಿಯಂತೂ ನಮಗೆ ಮತ್ತೊಂದು ಇನ್ಫೋ ಟೈನ್ ಮೆಂಟ್ ಆಗಿತ್ತು. ಕುವೆಂಪುರವರು ಚಿಕ್ಕದಾಗಿದ್ದಂದಿನಿಂದ ಕೊನೆಯುಸಿರೆಳೆಯುವವರೆಗಿನ ಸಾಕಷ್ಟು ಫೋಟೋಗಳು ಅವರ ಜೀವನದ ಗತ ವೈಭವವನ್ನು ಸಾರುತ್ತಿತ್ತು.

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ದಿ ಗ್ರೇಟ್ ಸೌಲ್ ಕುವೆಂಪುರವರು ಕಾಲವಾದ ಘಳಿಗೆ ರಾತ್ರಿ 1.00 ಘಂಟೆ. ಆದ್ದರಿಂದ ಅವರ ಮಗಳ ಸಲಹೆಯಂತೆ, ಕುವೆಂಪುರವರ ವಿಗ್ರಹದ ಹಿಂದೆ ಗಡಿಯಾರವಿರಿಸಿ ಅದರ ಸಮಯವನ್ನು ಒಂದು ಘಂಟೆಗೆ ನಿಲ್ಲಿಸಲಾಗಿದೆ. ಇದನ್ನು ಕಂಡ ನಮಗೆ ಒಂದು ಕ್ಷಣ ಉಸಿರುಗಟ್ಟಿತ್ತು. ಎಲ್ಲವನ್ನೂ ನಿಧಾನವಾಗಿ ಅರಗಿಸಿ ಅನುಭವಿಸುತ್ತಿದ್ದ ನಮಗೆ ಸಮಯ ಹೋದದ್ದೇ ತಿಳಿಯಲಿಲ್ಲ. ಒಂದೆರಡು ಪುಸ್ತಕಗಳನ್ನು ಕೊಂಡು, ನಂತರ ಮನೆಮುಂದಿದ್ದ ಕೃಷಿ ಕೊಠಡಿಗೆ ನಡೆದೆವು. ಅಲ್ಲಿ ಅವರು ಕೃಷಿಗೆಂದು ಉಪಯೋಗಿಸುತ್ತಿದ್ದ ಸಲಕರಣೆಗಳು ಮತ್ತದರ ನಾಮ ಫಲಕಗಳೂ ಇದ್ದವು. ಒಟ್ಟಾರೆ, ಆ ಮನೆ ಕುವೆಂಪುರವರ ಜೀವನ ಶೈಲಿಯ, ಅವರ ಪಾಂಡಿತ್ಯದ ಮತ್ತು ಅವರ ವ್ಯಕ್ತಿತ್ವದ ಒಂದು ಸಂಕೇತವಾಗಿತ್ತು. ಮನೆಯ ಮುಂದಿನ ಜಗುಲಿಯ ಮೇಲೆ ಕೂತು ಮತ್ತೊಂದಿಷ್ಟು ಪ್ರಕೃತಿಯ ಸ್ವಾದವನ್ನು ಆಸ್ವಾದಿಸಿ, ಆನಂದಿಸಿ ಹೊರಟೆವು. ಅಲ್ಲೇ ಮನೆಯ ಪಕ್ಕದ ಪುಟ್ಟ ಅಂಗಡಿಯಲ್ಲೇ ಖಾನಾವಳಿಯ ವ್ಯವಸ್ಥೆಯೂ ಆಯಿತು. ಕೊನೆಗೊಮ್ಮೆ ಮನೆಕಡೆ ತಿರುಗಿ ನೋಡಿ, ಕಾರು ಹತ್ತಿ ನಮ್ಮ ದಾರಿ ಹಿಡಿದೆವು.


ಕ್ಷೇಮವಾಗಿ, ಲಾಭವಾಗಿ....


ಕಾರು ಬೆಂಗಳೂರಿನತ್ತ ಮುಖಮಾಡಿತ್ತು. ಮನ ಕವಿಶೈಲವನ್ನೇ ಗುನುಗುತ್ತಿತ್ತು. ಮರಳಿ ಬೆಂಗಳೂರಿಗೆ ಹೋಗಲೇ ಬೇಕೇ? ಎನಿಸಿತ್ತು. ಅದೇ ಆಫೀಸ್, ಮನೆ, ಟ್ರಾಫಿಕ್, ಕಾಂಪಿಟೆಶನ್, ಡಿಪ್ಲೊಮಸಿ! ಛೆ ನಾವೂ ಈ ರೀತಿ ಹಳ್ಳಿಯಲ್ಲಿರಬಾರದಿತ್ತೆ ಎಂದೆನಿಸಿತ್ತು. 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ' ಎಂಬ ಅಡಿಗರ ಸಾಲು ನೆನಪಾಗಿ ನಗು ಬಂದಿತ್ತು. ಹೊರಡುವುದು ಮರಳಿ ಮನೆಗೆ ಆದರೂ ಈ ಪ್ರವಾಸ ಒಂದು ಹೊಸ ಅನುಭವವನ್ನು ದಕ್ಕಿಸಿತ್ತು. ಆ ಕಾಡಿನ ಪ್ರಕೃತಿಯು ಮೆಟಫಿಸಿಕಲ್ ಟಚ್ ನ ಅನುಭೂತಿ ನೀಡಿತ್ತು. ಹೊಸ ಆಯಾಮಗಳ, ಹೊಸ ಹುರುಪುಗಳ ಲಾಭ ನಮ್ಮದಾಗಿತ್ತು.

ಪ್ರಯಾಣದಲ್ಲಿ (ಕಾರಲ್ಲಿ ಕೂತೆ!) ಸಾಕಷ್ಟು ದಣಿದ ನಾವು ಕಾರಲ್ಲೇ ಚೆನ್ನಾಗಿ ನಿದ್ರಿಸಿದ್ದೆವು. ಕನಸಿನಲ್ಲಿ ಮತ್ತೆ ಕವಿಶೈಲದ ಬಂಡೆಗಳು ಕನವರಿಸಿತ್ತು! ಅಪ್ಪ ಎಚ್ಚರಿಸಿದಾಗಲೇ ತಿಳಿದ್ದದ್ದು ನಾವು ಆಗಲೇ ಬೆಂಗಳೂರನ್ನು ತಲುಪಿದ್ದೆವೆಂದು. ಯಾವ ನಾಯಿಯನ್ನು ಕಂಡರೂ ನೆನಪಾಗುತ್ತಿದ್ದ ಚೂಟಿಯನ್ನು ಅಂತೂ ವಾಪಸ್ ಕರೆತಂದು ಮನೆ ಸೇರಿದ್ದವು. ಅದರ ಆನಂದಕ್ಕಂತೂ ಪಾರವೇ ಇಲ್ಲ! ಗುಂಡ ತನ್ನ ಪೇಮೆಂಟ್ ಪಡೆದು ನಮ್ಮೆಲ್ಲರಿಗೂ 'ಬೈ' ಮಾಡಿ ಹೊರಟಿದ್ದ.

ಅಂತೂ ಈ ಪುಟ್ಟ ಪ್ರವಾಸ ನಮ್ಮ ದಿನನಿತ್ಯದ ಯಾಂತ್ರಿಕ ಜೀವನಕ್ಕೆ ಒಂದು ಬ್ರೇಕ್ ಹಾಕಿದಂತಿತ್ತು!

ಯಾಂತ್ರಿಕ ಬದುಕಿಗೆ ಬ್ರೇಕ್ ಹಾಕುವ ವೈಭವ - ಈ ಪ್ರವಾಸದ ಅನುಭವ (ಭಾಗ - 1)



ಬ್ರೇಕ್ ಹಾಕುವ ಮೊದಲು


ಎಂದಿನಂತೆ ಸುಖಾಸುಮ್ಮನೆ ಆಫೀಸಿಗೆ ಹೊರಡಲು ಸಿದ್ಧಳಾಗುತ್ತಿದ್ದ ನನಗೆ ಶೇವ್ ಮಾಡುತ್ತಿದ್ದ ಅಪ್ಪ ರೇಜರ್ನನ್ನು ಬಟ್ಟಲಿಗೆ ಕೆಡವುತ್ತ ಹೇಳಿದ ಮಾತು ಕೇಳಿ ಕಿವಿ ನೆಟ್ಟಗಾಯಿತು. ಲಘುಬಗೆಯಿಂದ ಹೋಗಿ ಕೇಳಿದೆ. ಹೌದು ನಾನು ಸರಿಯಾಗೇ ಕೇಳಿದ್ದೆ. ಬಹುದಿನಗಳ ಆಲೋಚನೆಯಿಂದಲೋ ಅಥವಾ ಅಮ್ಮನ ಪೀಡಿಕೆಯಿಂದಲೋ ಅಪ್ಪ ನಮ್ಮೆಲ್ಲರೊಡನೆ ಒಂದು ವೀಕ್ ಎಂಡ್ ಟ್ರಿಪ್ ಹೊರಡಲು ಸಿದ್ಧರಾಗಿದ್ದರು. ಎಲ್ಲರಿಗೂ ಲವಲವಿಕೆ! ಇನ್ನು ಹೊರಡುವ ಮಾತು, ಬಹುಕಡಿಮೆ (ಅಂದರೆ ಒಂದು ದಿನದ) ಸಮಯದಲ್ಲಿ ಹೊರಡುವ ಸ್ಥಳ ನಿರ್ಧರಿಸಿ, ಪ್ರಯಾಣದ ಆಯ್ಕೆ ನಿರ್ಧರಿಸಿ, ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಮನೆಯ ಮುದ್ದಿನ ಕೂಸಾದ ಚೂಟಿ (ನಾಯಿಮರಿ) ಯ ಇರುವಿಕೆಗೆ ಒಂದು ವ್ಯವಸ್ತೆ ಮಾಡಬೇಕಿತ್ತು! ನಮ್ಮ ಇದೇ ಮಾತುಕತೆಯಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ ನಮ್ಮ ಮನೆ ಕೆಲಸದಾಕೆ ಮಂಗಳಮ್ಮ, ನೆಲ ಸಾರಿಸುತ್ತಾ "ನೀವು ಹೋಗಿ ಬನ್ರಿ, ಅದರ ಚಿಂತೆ ನಿಮಗ್ಯಾಕೆ, ನಾನ್ ನೋಡ್ಕೋತೀನಿ" ಎಂದರು. ಆ ಮಾತಿನಿಂದ, ನಮ್ಮ ಅರ್ಧ ಭಾರ ಕಡಿಮೆಯಾದಂತಾಯಿತು. ಹೇಗೋ ಏನೋ ಎಂಬ ಯೋಚನೆ ಬಂದರೂ, ಆಕೆಯ ನಡವಳಿಕೆ, ಜವಾಬ್ದಾರಿ ತಿಳಿದಿದ್ದ ನಾವೆಲ್ಲರೂ ಸಮಾಧಾನಗೊಂಡೆವು. ಮುದ್ದು ಮರಿಯನ್ನು ಅವರೊಡನೆ ಬಿಟ್ಟಿರಲು ಒಪ್ಪಿದೆವು.

ಇಷ್ಟರಲ್ಲೇ ಘಂಟೆ ಒಂಭತ್ತಾಗಿತ್ತು. ತರಾತುರಿಯಲ್ಲಿ ಹಣೆ ಬಟ್ಟಿಡುತ್ತಲೇ ಹೇಳಿದೆ, "ಅಪ್ಪಾ, ಕುವೆಂಪುರವರ ಮನೆ ನೋಡಿ ಬರೋಣ" ಎಂದು. ಇತ್ತೀಚೆಗಷ್ಟೇ ಕುವೆಂಪುರವರ 'ಶ್ರೀ ರಾಮಾಯಣ ದರ್ಶನಂ' ಓದಲು ಪ್ರಾರಂಭಿಸಿದ್ದ ನಾನು ಅದರ ಭಾಷೆ - ಭಾವಗಳಿಂದ ಪುಳಕಗೊಂಡಿದ್ದೆ. ಅದರ ದಾರ್ಶನಿಕತೆಗೆ ಮಾರುಹೋಗಿದ್ದೆ. ಕುವೆಂಪುರವರು ಹುಟ್ಟಿ ಬೆಳೆದ ವಾತಾವರಣ, ಆ ಪ್ರಕೃತಿಯ ಸೌಂದರ್ಯ ಅವರ ಬರಹಗಳ ಸ್ಪೂರ್ತಿಯ ಸೆಲೆಯಾಗಿತ್ತು ಎಂದಿದ್ದ ಅಪ್ಪನ ಮಾತು ನೆನಪಾಗಿ, ಅದನ್ನೇ ನೋಡಬಹುದೆಂಬ ಹಂಬಲವಾಯಿತು. ಅಪ್ಪ ಸ್ವತಹ ಕವಿ, ಕನ್ನಡಾಧ್ಯಾಪಕರು ಇನ್ನು ಕೇಳಬೇಕೆ! ಅವರಿಗೂ ನನ್ನ ಸಲಹೆ ಸೂಕ್ತವಾಗಿ ತೋರಿತು. ಆದರೆ ಅದರ ಜೊತೆಗೆ ನೋಡಿ ಬರುವ ಸ್ಥಳಗಳನ್ನು ಆಯ್ಕೆ ಮಾಡಬೇಕಲ್ಲ. ಎಲ್ಲರು ಯೋಚಿಸುವ ಎಂದು ಹೇಳಿ, ಗಡಿಯಾರನೋಡಿದೆ, ತುಂಬಾ ತಡವಾಗಿತ್ತು. ತಕ್ಷಣ ಆಫೀಸಿಗೆ ಹೊರಟೆ.


ಬಹು ಆಯ್ಕೆ ಪರದಾಟ


ಆಫೀಸಿನಲ್ಲಿ ಹೇಳಿ ಕೇಳಿ ವೀಕ್ ಎಂಡ್, ಮೇಲಿನ್ನು ಪ್ರವಾಸದ ಯೋಚನೆಯಲ್ಲಿ ಮುಳುಗಿಹೋಗಿತ್ತು ಮೈಂಡ್! ಕೆಲಸ ಮಾಡಲು ಮೂಡಿಲ್ಲ. ತೀರ್ಥಹಳ್ಳಿಯ ಕುಪ್ಪಳಿಯನ್ನು ಕೇಂದ್ರವಾಗಿಟ್ಟು ಆಸುಪಾಸಿನ ವೀಕ್ಷಣಾ ಸ್ಥಳಗಳನ್ನು ಗೂಗಲ್ ಮಾಡಿದೆ ಸಾಕಷ್ಟು ದೊರೆಯಿತು. ಈ ಗೂಗಲ್ನ ಅಪಾಯವೆನೆಂದರೆ, ಬೇಕಿದ್ದಕ್ಕಿಂತ ಹೆಚ್ಚಿನ ಮಾಹಿತಿ ದೊರೆತು ನಮ್ಮ ಆಯ್ಕೆಗೇ ಚ್ಯುತಿ ತರುತ್ತದೆ. ನನಗೂ ಹಾಗೆ ಆಯಿತು. ನನ್ನ ಸ್ನೇಹಿತರಿಂದ ಮತ್ತಷ್ಟು ಮಾಹಿತಿ. ಕುವೆಂಪು ಮನೆ, ಮಡಿಕೇರಿ, ಮಂಗಳೂರು, ಕೊಡಚಾದ್ರಿ, ಆಗುಂಬೆ, ಕೊಲ್ಲೂರು, ಹಿದ್ಲುಮನೆ ಜಲಪಾತ, ಉಡುಪಿ, ಕೊಡಗು, ಮೈಸೂರು, ಊಟಿ, ಕೊಡೈಕೆನಾಲ್,ಇನ್ನೂ ಹಲವಾರು. ಇಷ್ತೆಲ್ಲಕ್ಕೂ ಮೀಸಲಾದ ಸಮಯ ಎರಡೇ ದಿನ!

ದಿಕ್ಕು ತೋಚದ ನಾನು ಎಲ್ಲ ಆಯ್ಕೆಗಳನ್ನೂ ಹೊತ್ತು ನೇರ ಮನೆಗೆ ನಡೆದೆ. ಅಪ್ಪನ ಮುಂದೆ ಎಲ್ಲ ಆಯ್ಕೆಗಳನ್ನು ಇತ್ತು ನನ್ನ ಜವಾಬ್ದಾರಿ ಕಳೆದುಕೊಂಡೆ. ಕೊನೆಕ್ಷಣದ ನಿರ್ಧಾರದಿಂದ ಮುನಿದಿದ್ದ ಅಪ್ಪ, ಅದೇ ಸಿಟ್ಟಿನಲ್ಲಿ ಆಯ್ಕೆಗಳನ್ನು ಮೆಲುಕುಹಾಕತೊಡಗಿದರು.ಪರದಾಟ ಒಂದರಮೇಲೊಂದು ವಕ್ಕರಿಸುವಂತೆ ಆಗಲೇಪವರ್ ಕಟ್ ಆಗಿತ್ತು. ಇನ್ನು ಕೆಲವೇ ಘಂಟೆಗಳಲ್ಲಿ ನಾವು ಹೊರಡಬೇಕಿತ್ತು, ಟ್ಯಾಕ್ಸಿಬುಕ್ ಆಗಿತ್ತು,ಚೂಟಿ ಹೊರಡಲು ಅಣಿಯಾಗಿತ್ತು.ಆದರಿನ್ನೂ ಪ್ರವಾಸ ಸ್ಥಳಗಳೇನಿರ್ಧಾರವಾಗಿಲ್ಲ! ಕತ್ತಲಲ್ಲೇ ಕ್ಯಾಂಡಲ್ ಹಚ್ಚಿ ಕರ್ನಾಟಕ ಮ್ಯಾಪ್ ಹಿಡಿದ ಮೊಮೆಂಟ್ ಥ್ರಿಲ್ಲಿಂಗ್ ಆಗಿತ್ತು!

ಹೀಗೆಲ್ಲ ಆಯ್ಕೆ ಸಾಧ್ಯವಿಲ್ಲ ಎಂದರಿತ ಅಪ್ಪ ಕೊನೆಗೂ ಅವರ ಸ್ನೇಹಿತರಿಗೆ ಕಾಲ್ ಮಡಿ, ಅವರ ಹುಟ್ಟೂರಾಗಿದ್ದ ಶಿವಮೊಗ್ಗದ ಆಸುಪಾಸಿನ ವೀಕ್ಷಣಾ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಇರುವ ಎರಡು ದಿನದಲ್ಲಿ - ಆಗುಂಬೆ, ಸಿರಿಮನೆ ಜಲಪಾತ, ಶೃಂಗೇರಿ ಮತ್ತು ಕುಪ್ಪಳಿ ಕವರ್ ಮಾಡಬಹುದು ಎಂದು ಲೆಕ್ಕವಾಯಿತು. ಕೊನೆಗೂ ಸ್ಥಳಗಳು ಫೈಸಲಾದವು. ಅಷ್ಟರಲ್ಲೇ ನಿದ್ರಾದೇವತೆ ನಮ್ಮನ್ನಾವಾಹಿಸಿದ್ದಳು. ಮುಂಜಾನೆಯೇ ಪ್ಯಾಕಿಂಗ್ ಮಾಡುವ ಸಮೇತ ಸಿದ್ಧರಾದೆವು. ನಮ್ಮ ಸಡವರ ನೋಡಿ ಚೂಟಿಗೆ ತಿಳಿದೇ ಹೋಗಿತ್ತು. ಇವರೆಲ್ಲ ನನ್ನ ಬಿಟ್ಟು ಹೋಗುತ್ತಾರೆ ಎಂಬ ಭೀತಿಯಿಂದ ಮಂಚದ ಕೆಳಗೆ ಹೋಗಿ ಅವಿತಿದ್ದು ಕಂಡು ನಾವೆಲ್ಲಾ ಚಕಿತರಾದೆವು. ಅನುವಾಗಿದ್ದ ಸಮಯಕ್ಕೆ ಟ್ಯಾಕ್ಸಿ ಹಾಜರ್. ಚೂಟಿಯನ್ನು ಅದರ ನಿಗದಿತ ಸ್ಥಳಕ್ಕೆ ತಲುಪಿಸಿ ನಾವು ಹೊರಟೆವು. ಮರಿಯನ್ನು ಬಿಟ್ಟ ಬೇಸರ ಹಾಗು ಪ್ರವಾಸದ ಉತ್ಸಾಹ ಎರಡೂ ಕಲಸುಮೇಲೋಗರವಾಗಿ ಒಂದು ಹೊಸ ಅನುಭವ ತಂದಿತ್ತು.


ಅವಿದ್ಯಾವಂತನ ವೈಚಾರಿಕತೆ


"ಮೇಡಂ, ಬೇಕಾದ್ ಸಿಡಿ ಇಟ್ಕೋಳಿ, ನನ್ ಹತ್ರ ಇಲ್ಲ", ಗಾಡಿ ಸ್ಟಾರ್ಟ್ ಮಾಡುವ ಮೊದಲು ಉಲಿದ ಡ್ರೈವರ್. ಅಪ್ಪನ ಸ್ನೇಹಿತರು ಕಳುಹಿಸಿದ್ದ ಈ ಡ್ರೈವರ್ ಹೆಸರು ಗುಂಡ. ಸಣ್ಣ ಗಾತ್ರದ, ಚಿಕ್ಕ ಗಡ್ಡದ ಈ ವ್ಯಕ್ತಿಯ ವಯಸ್ಸು ಇಪ್ಪತ್ತೈದು ಮೀರಿರದು. ನಮ್ಮ ಪ್ರಯಾಣ ಶುರುವಾದಷ್ಟೇ ವೇಗವಾಗಿ ಸಾಗತೊಡಗಿತು. ಪ್ರಯಾಣ ಸಾಗುತ್ತಾ ಹಾಗೆ ತಿಂಡಿ ತೀರ್ಥದ ಸಮಯವಾಯಿತು. ಗಾಡಿ ನಿಲ್ಲಿಸಿ ಮನೆಯಿಂದ ಅಮ್ಮ ಮಾಡಿ ತಂದಿದ್ದ ತಿಂಡಿ ತಿಂದು ಮುಗಿಸಿದೆವು. ರಸ್ತೆ ಬದಿಯ, ಬಾಳೆ ಎಲೆಯ ಆ ತಿಂಡಿ ಕಾರ್ಯಕ್ರಮ ದೊಡ್ಡ ಹೋಟೆಲ್ ಗಿಂತ ಸುಖವಾಗಿತ್ತು. ದಾರಿಯಲ್ಲಿ ಕಂಡವರ ಜೊತೆಗೆ ಗುಂಡ ಉರ್ದುವನ್ನು ಸುಲಲಿತವಾಗಿ ಮಾತನಾಡುವುದನ್ನು ಕಂಡೆವು. ಅಷ್ಟರಲ್ಲೇ ನಮಗೆ ಸಿಕ್ಕಿತ್ತು ಒಂದು ಮುಸಲ್ಮಾನರ ದರ್ಗಾ. ಗುಂಡನ ಹೇಳಿಕೆಯ ಮೇರೆಗೆ ಎಲ್ಲರೂ ಇಳಿದು ದರ್ಗಾದ ಬಳಿ ಬಂದೆವು. ಒಳಹೊಕ್ಕಳು ಹಿಂಜರಿಯುತ್ತಿದ್ದ ನಾವು "ಓಗ್ಬಹುದು ಓಗ್ರಿ ಒಳಗೆ" ಎಂಬ ಗುಂಡನ ಮಾತು ಕೇಳಿ ಒಳಹೊರಟೆವು. ಅಲ್ಲೊಬ್ಬ ಮುಸಲ್ಮಾನ ಪಾದ್ರಿ ಅವರ ದೇವರಾದ ಸಮಾಧಿಯ ಎದುರು ಕುಳಿತಿದ್ದರು. ಆ ದರ್ಗಾ ಬಾಬಾಬುಡನ್ ಗಿರಿಗೆ ಸುರಂಗ ಮಾರ್ಗ ಎಂಬ ಅಂಬೋಣ! ನವಿಲುಗರಿಯ ಆಶೀರ್ವಾದದೊಂದಿಗೆ ದೇವರಿಗೆ ಬೆನ್ನು ಮಾಡದಂತೆ ವಂದಿಸಿ ನಾವು ಹಿಂತಿರುಗಬೇಕಿತ್ತು. ಇದು ಗುಂಡನ ಆದೇಶ!

ಮತ್ತೆ ಗುಂಡನ ಉರ್ದು ಚಮಕಿಯನ್ನು ಕಂಡ ನನಗೆ ಕುತೂಹಲ ತಡೆಯಲಾಗಲಿಲ್ಲ. "ನೀವು ಉರ್ದು ಇಷ್ಟು ಚೆನ್ನಾಗಿ ಮಾತನಾಡುತ್ತೀರಿ" ಎಂದೆ. ಅವನು, "ಮೇಡಂ, ನಾವು ಮುಸ್ಲಿಮ್ಸು" ಎಂದ! ಆ ಮಾತಿನಿಂದ ನಾನು ದಂಗಾದೆ! "ಮತ್ತೆ ಹೆಸರು?" ಕೇಳಿದೆ ನಾನು. "ಮೊಹಮ್ಮದ್ ಹುಸೇನ್ ನನ್ನೆಸ್ರು, ಆದ್ರೆ ಎಲ್ರೂ ಕರಿಯೋದು ಗುಂಡ, ಯಾಕೆ ಅಂದ್ರೆ ನಂಗೆ ಚಿಕ್ಕಂದ್ನಲ್ಲಿ ತಲೇಲಿ ಕೂದಲೇ ಇರಲಿಲ್ಲವಂತೆ" ಎಂದು ಹೇಳಿ ನಕ್ಕ. ಅವನ ಕನ್ನಡ ಭಾಷೆಯ ಸುಲಲಿತತೆ ಭಾಗಶಃ ಕನ್ನಡಿಗರಿಗೂ ಇಲ್ಲವೇನೋ ಎಂಬಂತೆ ಇತ್ತು. ಇದನ್ನು ಕೇಳಿ ಬೆರಗಾಗಿ ಅಪ್ಪ ಅವನನ್ನು ಮತ್ತಷ್ಟು ಮಾತಿಗೆಳೆದರು. ಆಗ ಅವನು "ಸಾರ್, ನಂದೊಂದು ದೊಡ್ಡ ಸ್ಟೋರಿ" ಎಂದು ಹೇಳಿ ಪ್ರಾರಂಭಿಸಿದ. ಮುಸಲ್ಮಾನನಾದ ಅವನು ಒಬ್ಬ ಕುರುಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಹಿಂದೂ ಮುಸ್ಲಿಂ ಸಮಾಗಮವನ್ನು ಒಪ್ಪದ ಜನರಿಂದ ದೂರವಾಗಿದ್ದ. ಅಂತರ್ ಜಾತಿಯಲ್ಲ, ಅಂತರ್ ಮತೀಯತೆಗೂ ಮೀರಿತ್ತು ಈ ಹೆಚ್ಚೇನೂ ವಿದ್ಯಾವಂತನಲ್ಲದವನ ಜಾತ್ಯಾತೀತತಾ ಮನೋಭಾವ! "ಏನ್ ಸರ್, ಈ ಜಾತಿ ಇದೆಲ್ಲಾ ನಾವೇ ಮಾಡ್ಕೊಂಡಿದ್ದು ಅಲ್ವಾ" ಎಂದು ಹೇಳಿ ಅವನು ತನ್ನ ಹೆಂಡತಿಯ ಗುಣಗಾನಕ್ಕಿಳಿದ. ನನ್ನ ಮನಸ್ಸಿನ್ನೂ ಅದೇ ಹಿಂದೂ-ಮುಸ್ಲಿಂ ಕತೆಯನ್ನು ಗುನುಗಿತ್ತು.

ಈ ಅವಿದ್ಯಾವಂತ ಹುಡುಗನಷ್ಟೇ ಸರಳವಾಗಿ ಜನ ಯಾಕೆ ಆಲೋಚಿಸಬಾರದು? ಜನ ವಿದ್ಯಾವಂತರಾಗುತ್ತಾ, ಸುಸಂಸ್ಕೃತರಾಗುತ್ತಾ ನ್ಯಾರೋ ಮೈಂಡ್ ಆಗ್ತಾರೆ ಅನ್ನೋ ಅಪ್ಪನ ಮಾತು ನೆನಪಾಯಿತು. ನಿಜವೆನಿಸಿತು. ಅವನ ಹೆಂಡತಿ ಬಗೆಗಿನ ಪ್ರೀತಿ ತುಂಬಿದ ಮಾತುಗಳು ನಮಗೆಲ್ಲರಿಗೂ ಪ್ರಿಯವಾಗಿತ್ತು. ಅವನ ಮುಗ್ಧತೆಯ, ಒಳ್ಳೆಯತನಕ್ಕೆ ಅಷ್ಟೇ ಗೌರವ ಹೆಚ್ಚಿತ್ತು. ಪ್ರಯಾಣ ಮುಂದೆ ಸಾಗಿತ್ತು.


ಭದ್ರವಾದ ಭದ್ರಾವತಿ ಅಣೆಕಟ್ಟು


ಆಗುಂಬೆಯತ್ತ ಮುಖಮಾಡಿದ್ದ ನಮಗೆ ನಡುವಿನಲ್ಲಿ ದೊರೆತ ಮತ್ತೊಂದು ಪ್ರಸಾದ ಭದ್ರಾವತಿ ಅಣೆಕಟ್ಟು. ಪ್ರಕೃತಿ ಸೌಂದರ್ಯಕ್ಕೆ ಹಾತೊರೆದಿದ್ದ ಮನ, ಆ ಪ್ರಕೃತಿಯನ್ನು ಚೌಕಟ್ಟಾಗಿಸುವ ವಿಜ್ಞಾನದ ಕಡೆ ಮುಖಮಾಡಲು ಮೊದಲಿಗೆ ಇಚ್ಚಿಸಲಿಲ್ಲ. ಆದರೂ ಅಪ್ಪನಿಗಿದ್ದ ನೀರಾವರಿ ಯೋಜನೆಗಳ ಬಗೆಗಿನ ಆಸಕ್ತಿಯ ಮೇರೆಗೆ ಭದ್ರಾವತಿ ಅಣೆಕಟ್ಟನ್ನು ಆವಿಷ್ಕರಿಸಲು ಹೊರಟೆವು. ಅದನ್ನು ತಲುಪಿದ ನಂತರ ತಿಳಿಯಿತು ನನ್ನ ಭಾವ ತಪ್ಪೆಂದು. ಆ ಸುನೀಲವಾದ ಅಗಾಧವಾದ ಭದ್ರಾವತಿ ನದಿಯ ಸೊಬಗಿಗೆ ಕಣ್ಮನ ತಣಿಯಿತು. ಕಂಡಷ್ಟೂ ಕಾಣುವಂತ ಆ ವಿಸ್ತೃತ ಜಲಧಾರೆಗೆ ಮತ್ತಾ ಭದ್ರ ನಿರ್ಮಿತ ಕಟ್ಟಡಕ್ಕೆ ಮನದಲ್ಲೇ ಮಣಿದು ಅಲ್ಲಿಂದ ಹೊರಟೆವು.
ಹಾದಿಯಲ್ಲಿ ಕಂಡ ಮತ್ತೊಂದು ಅಣೆಕಟ್ಟು, ಗಾಜನೂರಿನದು. ಭದ್ರಾವತಿಯಷ್ಟು ವಿಸ್ತಾರವಾಗಿ, ಮಜಬೂತಾಗಿಲ್ಲದಿದ್ದರೂ ತನ್ನದೇ ಆದ ಆಕರ್ಷಣೆಯನ್ನು ಹೊಂದಿತ್ತು. ಅಲ್ಲಿಂದ ಹೊರಟ ನಾವು ನಡುವೆ ಉದರ ಪೂಜೆಯನ್ನು ಮುಗಿಸಿ ಪ್ರಯಾಣ ಮುಂದುವರೆಸಿದೆವು.




ಆಗುಂಬೆಯಾ... ನಿರಾಶೆ ಸಂಜೆಯಾ!


ಆಗುಂಬೆಯೆಡೆಗೆ ಮುಖಮಾಡಿ ಹೊರಟ ನಮಗೆ ನಡುವೆ ಕೆಲವು ವೀಕ್ಷಣಾ ಸ್ಥಳಗಳು ದೊರೆತರೂ, ಆಗುಂಬೆಯ ಸೂರ್ಯಾಸ್ತ ತಪ್ಪಿಹೊಗಬಾರದೆಂಬ ಆತಂಕದಿಂದ ಎಲ್ಲವನ್ನೂ ಬಿಟ್ಟು ನೇರ ಪಯಣ ಮುಂದುವರೆಸಿದೆವು. ಕಾಡಿನ ನಮ್ಮ ಪಯಣ ಸಾಗುತ್ತಾ ಹೋದಂತೆ, ಆ ವನರಾಶಿಯ ಸಿರಿತನ, ನೀರವತೆ ಮತ್ತು ಗಾಂಭೀರ್ಯತೆಯನ್ನುಣ್ಣುತ್ತಾ ಕಳೆದುಹೋಗಿದ್ದೆವು. ಪ್ರಕೃತಿ ದೇವತೆ ನಮ್ಮನ್ನು ಪ್ರೇಮದಿಂದ ತನ್ನ ಮಡಿಲಿಗೆ ಸ್ವೀಕರಿಸಿದಂತಾ ಅನುಭೂತಿ! ಸಂಜೆಗತ್ತಲಾಗುವ ಮುನ್ನ ಆಗುಂಬೆ ತಲುಪುತ್ತೆವೆಯೋ ಎಂಬ ಅನುಮಾನ, ತರಾತುರಿ.

ಕೊನೆಗೂ ಸಿಕ್ಕಿತು ನಮ್ಮ ಡೆಸ್ಟಿನೇಶನ್ ಪಾಯಿಂಟ್ ಆಗುಂಬೆ. ಸೂರ್ಯಾಸ್ತಮಾನಕ್ಕೆ ಸಾಕಷ್ಟು ಸಮಯವಿತ್ತು. ವ್ಯೂ ಪಾಯಿಂಟ್ ತಲುಪಿ ಸುತ್ತೆಡೆಯ ಮನೋಹರ ದೃಶ್ಯವನ್ನು ಆನಂದಿಸತೊಡಗಿದೆವು. ಪ್ರಕೃತಿಯ ರಮಣೀಯ ದೃಶ್ಯ, ಎಲ್ಲೆಡೆ ಹಸಿರ ಸಿರಿ. ಸೂರ್ಯನ ಅಸ್ತಮಾನದ ನಿರೀಕ್ಷೆಯ ಜೊತೆಗೆ ಜನಜಂಗುಳಿಯೂ ಹೆಚ್ಚುತ್ತಿತ್ತು. ಅಲ್ಲಿ ನೆರೆದಿದ್ದ ಎಲ್ಲರೂ ಏಕತಾನದಿಂದ ಕಾಯುತ್ತಿದ್ದುದು ಬೆಳಕನೀವ ಭಾನುವನ್ನು ಮುಳುಗಿಸುವುದಕ್ಕೆ? ಹೀಗೆ ಯೋಚಿಸಿ ನಗು ಬಂತು. ಸೂರ್ಯ ಮುಳುಗಿ, ಆಗಸದ ಮರೆಯಲ್ಲಿ ಲೀನವಾಗಿ ಕತ್ತಲೆಯನ್ನಬ್ಬುವುದು ನಿಜಕ್ಕೂ ಸಂತೋಷದ ವಿಷಯವೇ? ಎಂಬ ಕನ್ಫ್ಯೂಶನ್ ನಲ್ಲಿದ್ದ ನನಗೆ, ಆಗಷ್ಟೇ ವಾನರ ಸೈನ್ಯದಂತೆ ನೆರೆದಿದ್ದ ಕಾಲೇಜ್ ಹುಡುಗ ಹುಡುಗಿಯರ ಗುಂಪೊಂದು ನೆಲೆಸಿದ್ದು ಅರಿವಾಯಿತು. ಅವರ ನಗು, ಚೀರಾಟ, ಒಬ್ಬರನ್ನೊಬ್ಬರು ಕೆಣಕುವ ಬಗೆ, ಕೇರ್ ಫ್ರೀ ಆಟಿಟ್ಯೂಡ್ ನಮ್ಮನ್ನು ಸಿಟ್ಟಿಗೆಬ್ಬಿಸಿದರೂ, ಒಳ್ಳೆಯ ಟೈಮ್ ಪಾಸ್ ಆಗಿತ್ತು. ಅವರ ಮಾತುಗಳ ಬೇಸ್ ನಲ್ಲಿ ಕಥೆಗಳನ್ನು ಹೆಣೆಯುತ್ತಾ ಹೋದಂತೆ ಸೂರ್ಯಾಸ್ತದ ಸಮಯ ಹತ್ತಿರವಾಗಿತ್ತು.

ಕೊನೆಯವರೆಗೂ ನಮ್ಮ ಸಾಥ್ ನೀಡಿದ ಸೂರ್ಯ ಇನ್ನೇನು ಮುಳುಗಬೇಕು ಎಂದಾಗ ಮೋಡದ ಮರೆಯಾಗಿ ನಮ್ಮೆಲ್ಲರಿಗೂ ಚಳ್ಳೆ ಹಣ್ಣು ತಿನ್ನಿಸಿದ. ಅಷ್ಟೆಲ್ಲಾ ನಿರೀಕ್ಷಿತರಾದ ನಾವು ನಿರಾಶೆಯಾಗಿ ಹಿಂತಿರುಗಿದೆವು. ಆದರೂ ಸ್ಥಳಮಹಿಮೆಯೆಮ್ಬಂತೆ ಪ್ರಕೃತಿಯ ನೋಟದಿಂದ, ಅದರ ಅನುಭವದಿಂದ ನಾವು ಸಂತ್ರುಪ್ತರಾಗಿದ್ದೆವು. ಆಗುಂಬೆಯಿಂದ ಶೃಂಗೇರಿಯತ್ತ ನಮ್ಮ ಮುಂದಿನ ಪಯಣ.

(ಮುಂದುವರೆದಿದೆ...)